Khanapur

ದೇಶಿ ಕ್ರೀಡೆಗಳತ್ತ ಗಮನಹರಿಸಿ :- ಪಿಡಿಓ ಬಾಲರಾಜ್ ಭಜಂತ್ರಿ

Share

ಖಾನಾಪೂರ ತಾಲೂಕಿನ ಲೋಂಡಾ ಗ್ರಾಮದ ಶ್ರೀ ಮಾತಂಗಿ ದೇವಸ್ಥಾನ ಕಮೀಟಿ ಗಾಂಧಿನಗರದ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಈ ಪಂದ್ಯಾವಳಿಯನ್ನು ಲೋಂಡಾ ಗ್ರಾಮ ಪಂಚಾಯಿತಿಯ ಪಿಡಿಒ ಬಾಲರಾಜ್ ಭಜಂತ್ರಿ ಅವರು ಉದ್ಘಾಟಿಸಿ ಮಾತನಾಡಿ ದೇಶಿ ಕ್ರೀಡೆಗಳತ್ತ ಗಮನಹರಿಸಿ,ಕೇವಲ ಕ್ರಿಕೆಟ್ ನತ್ತ ಗಮನ ಹರಿಸಿದೆ ನಮ್ಮ ದೇಸಿ ಆಟಗಳನ್ನು ಕೂಡಾ ಮಕ್ಕಳು, ಯುವಕರು ಆಡಿ ಬೆಳೆಸಬೇಕು ಈ ಪರಂಪರೆಯ ರಾಯಭಾರಿಗಳು ಯುವಕರಾಗಬೇಕು, ಸದೃಢ ದೇಹದಲ್ಲಿ ಸದೃಢವಾದ ಮನಸ್ಸು ಇರುವ ಕಾರಣ ದುಶ್ಚಟಗಳಿಗೆ ಬಲಿಯಾಗದೆ ಜೀವನವನ್ನು ರೂಪಿಸಿಕೊಳ್ಳುವ ಕಾರ್ಯ ಯುವಕರಿಂದಾಗಬೇಕೆಂದು ಹೇಳಿದ್ರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಶೇವರಿನ್ ಡಯಾಸ್, ಸಮೀರ್ ಖಾನ್ ನೀಲಕಂಠ, ಕುಮಾರ್ ಪಾಟೀಲ್, ಸಂತೋಷ ಚಿಂಮನ್ ರಾವ್ , ನಾರಾಯಣ್ ಉಸಪಕರ್, ಯಶವಂತ ಗಾವಡೆ,ರಫೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!