ಹೌದು ಪ್ರತಿದಿನವೂ ಈ ಖಡಿ ಸಾಗಾಣಿಕೆಯ ಮಾಡುವ ಟಿಪ್ಪರ್ ಲಾರಿಗಳಿಂದ ರಸ್ತೆ ಹಾಳಾಗುತ್ತಿದ್ದು, ಇದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಈ ಖಡಿ ಸಾಗಾಣಿಕೆಯ ಮಾಡುವ ಟಿಪ್ಪರ್ ಲಾರಿಗಳನ್ನು ತಡೆದು ರಸ್ತೆ ತಡೆ ಖಡಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆಯಿಂದಲೇ ಈ ಟಿಪ್ಪರ್ ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಪರಿಸರ ಮತ್ತು ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ರಸ್ತೆ ಅಂತೂ ಸಂಪೂರ್ಣ ಹಾಳಾಗುತ್ತಿದೆ ರಸ್ತೆಯ ದುರಸ್ತಿಗೆ ಖಡಿ ಮಾಲಿಕರು ಸ್ವಲ್ಪ ಖಡಿ ಕೂಡಾ ನೀಡುತ್ತಿಲ್ಲ ರಸ್ತೆ ಸಂಪೂರ್ಣ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಧ್ಯಾಹ್ನದ ಸಮಯದವರೆಗೂ ಲಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ತದನಂತರ ಟಿಪ್ಪರ್ ಲಾರಿಗಳನ್ನು ಸೋಮವಾರದಿಂದ ಇಲ್ಲಿಂದ ಸಾಗಾಟ ಮಾಡುವುದಿಲ್ಲ ಎಂದು ಹೇಳಿ ವಿನಂತಿಸಿದ ನಂತರ ಈ ಟಿಪ್ಪರ್ ಲಾರಿಗಳನ್ನು ಬೀಡಲಾಗಿದೆ ಎಂದು ತಿಳಿದು ಬಂದಿದೆ.
