ಈ ಗ್ರಾಮದಲ್ಲಿ ಪಂಚಕಲ್ಯಾಣ ಮಹೋತ್ಸವದ ವೈಭವ ಕಳೆಗಟ್ಟಿತ್ತು..ಮೆರವಣಿಗೆಯಲ್ಲಿ ಆನೆ,ಕುದುರೆಗಳು ಜನಮನ ಸೇಳೆದವು ಅಷ್ಟಕ್ಕೂ ಇಂತಹ ವೈಭವ ಕಂಡುಬಂದಿದ್ದು,ಎಲ್ಲಿ ಅಂತೀರಾ ಹಾಗಾದರೆ ಈ ವರದಿ ನೋಡಿ…

ಒಂದೆಡೆ ದಂಪತಿಗಳ ಜಂಬುಸವಾರಿ..ಇನ್ನೊಂದೆಡೆ ಮುದ್ದು ಮಕ್ಕಳ ಕುದುರೆ ಸವಾರಿ..ಮತ್ತೊಂದೆಡೆ ಸ್ವಾಗತಕ್ಕೆ ನಿಂತಿರೋ ಬಾಲೆಯರು..ಅರೇ..ಇದೇನು ಹೇಳ್ತಾ ಇದ್ದೀರಿ..ಇದೇನು ಇಂದ್ರಲೋಕವೋ? ಭೂ ಲೋಕವೋ ಅನ್ನೋ ಡೌಟು ಬರೋವಂತಿದೆಯಲ್ಲ. ಹೌದು, ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪಂಚ ಕಲ್ಯಾಣ ಮಹೋತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು. ಚಂದೂರು ಗ್ರಾಮದ ಜೈನ ಸಮುದಾಯ ಇದೇ ಫೆಬ್ರವರಿ 11 ರಿಂದ 15 ರವರೆಗೆ ಆಯೋಜನೆ ಮಾಡಲಾಗಿದ್ದು, ಮಹೋತ್ಸವದ ಹಿನ್ನೆಲೆಯಲ್ಲಿ ಜೈನ ಧರ್ಮದ ಧ್ವಜಾರೋಹಣವನ್ನು ಮಾಜಿ ಶಾಸಕ ಕಲ್ಲಪ್ಪ ಮಗೆನ್ನವರ ದಂಪತಿಗಳು ನೆರವೇರಿಸಿದರು.

ಇದಕ್ಕೂ ಮೊದಲು ಗ್ರಾಮದ ಜೈನ ಬಸದಿಯಿಂದ ಮಹೋತ್ಸವ ಜರುಗುವ ವೇದಿಕೆಯವರೆಗೆ ಆನೆ, ಕುದುರೆಗಳ ಮೆರವಣಿಗೆಯ ಮೂಲಕ ಬಾಹುಬಲಿ ಮೂರ್ತಿಯನ್ನು ತರಲಾಯಿತು. ಹಾಡು, ನೃತ್ಯ, ಬ್ಯಾಂಜೋದೊಂದಿಗೆ ಮೆರವಣಿಗೆ ಮೂಲಕ ವಿದ್ಯಾಭೂಷಣ ಮಹಾರಾಜರು ತಲೆ ಮೇಲೆ ಹೊತ್ತು ಬಾಹುಮಲಿ ಮೂರ್ತಿಯನ್ನು ವೇದಿಕೆಯಲ್ಲಿ ವಿರಾಜಮಾನಗೊಳಿಸಲಾಯಿತು
ಪಂಚಕಲ್ಯಾಣ ಮಹೋತ್ಸವದ ಉದ್ಘಾಟನೆಯನ್ನು ಮಾಜಿ ಶಾಸಕ ಕಲ್ಲಪ್ಪ ಮಗೆನ್ನವರ ಸೇರಿದಂತೆ ಜೈನ ಸಮಾಜದ ಗ್ರಾಮದ ಮುಖಂಡರು ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಪ್ಪಾಸಾಬ ಜಮದಾಡೆ, ಸಾಗರ ಪಟ್ಟಣಕುಡೆ, ಅನಂತಾ ಪಟ್ಟಣಕುಡೆ, ಭರತ ಮದಬಾವೆ, ಅನಿಲ ಬಿಂದಗೆ, ಅನಿಲ ಹಿರೇಕುಡೆ, ಸುಕುಮಾರ ಬೆಡಗೆ, ಬಾಳು ಚೌಗಲೆ, ಅಶೋಕ ಜಮದಾಡೆ, ಪಿಂಟು ಜಮದಾಡೆ ಮುಂತಾದವರು ಉಪಸ್ಥಿತರಿದ್ದರು.
ಮಹಿಳೆಯರು, ಮಕ್ಕಳು, ಯುವಕರು ಬಾಹುಬಲಿ ಮೂರ್ತಿಗೆ ನಮಿಸಿದರು. ಇಂದ್ರಾಣಿ, ಇಂದ್ರ ‘ ಧರಣೇಂದ್ರ, ಶ್ರೀದೇವಿ, ಧೃತಿದೇವಿ, ಬುದ್ಧಿದೇವಿ ಸೇರಿದಂತೆ ವಿವಿಧ ದೇವತೆಗಳ
ವೇಷ ಭೂಷಣ ತೊಟ್ಟು ಪಂಚಕಲ್ಯಾಣ ಮಹೋತ್ಸವದಲ್ಲಿ ಮೆರಗು ತಂದರು.