Khanapur

ಗಂದಿಗವಾಡ ಅಲ್ಪಸಂಖ್ಯಾತರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ

Share

ಖಾನಾಪೂರ್ ತಾಲೂಕಿನ ಗಂದಿಗವಾಡ ಗ್ರಾಮದ ಅಲ್ಪಸಂಖ್ಯಾತರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷರಾದ ರಾಜಾ ರಮೀಜ್ ನಾಸಿರುದ್ದಿನ್ ಭಾಗವಾನ್ ಹಾಗೂ ಉಪಾಧ್ಯಕ್ಷರಾದ ಇಸಾಕ್ ತಿಗಡಿಯವರನ್ನು ಸಹಕಾರಿ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಯಿತು.

ಗಂದಿಗವಾಡ ಗ್ರಾಮದ ಅಲ್ಪಸಂಖ್ಯಾತರ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜಾ ರಮೀಜ್ ನಾಸಿರುದ್ದಿನ್ ಭಾಗವಾನ್ ಹಾಗೂ ತಿಗಡಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ರಾಜಾ ರಮಿಜ ನಾಸಿರುದ್ಧಿನ್ ಮಾತನಾಡಿ, ಮುಂಬರುವ ದಿನಗಳಲ್ಲಿ ಈ ಸಂಘವನ್ನು ಮಾದರಿ ಸಂಘವನ್ನಾಗಿ ಅಭಿವೃದ್ಧಿಪಡಿಲಾಗುವುದು. ಸಹಕಾರಿ ಮೂಲಕ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದ್ದು, ಸದಸ್ಯರಿಗೆ ಮುಂದಿನ ದಿನಗಳಲ್ಲಿ ಇದರ ಪ್ರಯೋಜನ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಹಸೇನ್ ಒಕ್ಕುಂದ, ಸಾದಿಕ್ ಮಲಿಕನವರ್, ಹಸಿನಬಾನು ಹಟ್ಟಿಹೊಳಿ, ತಮ್ಮಣ್ಣ ಹೊಸಮನಿ, ಪಾತಿಮಾ ಮುಲ್ಲಾ, ಅಬ್ದುಲ್‍ರೆಹಮಾನ್ ಹೈದರಲಿ ಸಾಹೇಬ್‍ಖಾನ, ಸಹಕಾರಿಯ ಕಾರ್ಯದರ್ಶಿ ವೈ.ಎ.ಮುಲ್ಲಾ, ಸಾದಿಕ್ ಮನಿಯಾರ್, ಇಂತಿಯಾಜ್ ನಾಗವಾನ್, ಪುಂಡಲೀಕ್ ಖಾತಗಾರ್ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!