ಯುವತಿಯನ್ನು ಚುಡಾಯಿಸಿದ ಆರೋಪ ಹಿನ್ನೆಲೆ ರಾಜಸ್ಥಾನಿ ಹುಡುಗನೊರ್ವನಿಗೆ ಸಾರ್ವಜನಿಕರು ಗೂಸಾ ಕೊಟ್ಟಿರುವ ಘಟನೆ ಖಾನಾಪುರ ಪಟ್ಟಣದಲ್ಲಿ ನಡೆದಿದೆ.

ಹೌದು ಖಾನಾಪುರ ಪಟ್ಟಣದ ಶಿವ ಸ್ಮಾರಕದಲ್ಲಿ ಕೆಲ ಯುವತಿಯರು ಟೇಲರಿಂಗ್ ಕ್ಲಾಸ್ ಹೋಗುತ್ತಾರೆ. ಹೀಗೆ ಹೋದಂತಹ ಯುವತಿಯರ ಕೈಯನ್ನು ರಾಜಸ್ಥಾನಿ ಹುಡುಗನೊರ್ವ ಕೈ ಹಿಡಿದು ಎಳೆದಿದ್ದಾನೆ. ಕೂಡಲೇ ಹೊರಗಡೆ ಓಡಿ ಹೋದ ಕೆಲ ಯುವತಿಯರು ಸ್ಥಳೀಯರಿಗೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆ ಹುಡುಗನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಬಳಿಕ ಆ ಹುಡುಗನಿಗೆ ಬುದ್ಧಿ ಮಾತು ಹೇಳಿದ ಸ್ಥಳೀಯರು ಆತನನ್ನು ಮನೆಗೆ ಕಳಿಸಿದ್ದಾರೆ.