State

ಕುತೂಹಲ ಮೂಡಿಸಿದ ದೇವೇಂದ್ರ ಫಡ್ನವೀಸ್-ಲಕ್ಷ್ಮಣ ಸವದಿ ಭೇಟಿ

Share

ಮೊನ್ನೆಯಷ್ಟೇ ಮಹಾರಾಷ್ಟ್ರ ಸಿಎಂ ದೇವೇದ್ರ ಫಡ್ನವೀಸ್‍ರನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದು ಸಧ್ಯ ಕುತೂಹಲ ಮೂಡಿಸಿದೆ.

ಹೌದು ಗೋವಾ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಣಜಿಯಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ದೇವೆಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆ ಭೇಟಿಯಾಗಿದ್ದಾರೆ. ಗೋವಾ ಚುನಾವಣೆ ಪ್ರಚಾರದ ಉಸ್ತುವಾರಿಯಾಗಿರುವ ದೇವೆಂದ್ರ ಫಡ್ನವೀಸ್. ಲಕ್ಷ್ಮಣ ಸವದಿ ಹಾಗೂ ಉಮೇಶ ಕತ್ತಿ ಟೀಂ ವಿರುದ್ದ ದೇವೇಂದ್ರ ಫಡ್ನವೀಸ್‍ಗೆ ರಮೇಶ ಜಾರಕಿಹೊಳಿ ದೂರು ನೀಡಿದ್ದರು.

ಇದೀಗ ರಮೇಶ ಜಾರಕಿಹೊಳಿ ದೂರಿಗೆ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿರುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲಾ ರಾಜಕಾರಣದ ಬೆಳವಣಿಗೆಯನ್ನು ದೇವೇಂದ್ರ ಫಡ್ನವೀಸ್ ಲಕ್ಷ್ಮಣ ಸವದಿ ತಂದಿದ್ದಾರೆ. ಈ ವೇಳೆ ಸಚಿವರಾದ ಪ್ರಭು ಚವ್ಹಾಣ, ಭೈರತಿ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Tags:

error: Content is protected !!