ಹುಬ್ಬಳ್ಳಿಯ ಕಿಮ್ಸ್ ಒಂದಲ್ಲ ಒಂದು ಅವಾಂತರಗಳ ಮೂಲಕ ಸುದ್ದಿಯಾಗುತ್ತಲೇ ಇದೆ. ಆದರೆ ಈಗ ಆಡಳಿತಾಧಿಕಾರಿ ಖುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಫೈಟಿಂಗ್ ಸುರುವಾಗಿದೆ. ನೀ ಕೊಡೆ.. ನಾ ಬಿಡೆ.. ಎನ್ನುತ್ತಿರುವ ಅಧಿಕಾರಿಗಳ ಖುರ್ಚಿ ಕಿತ್ತಾಟದ ಹಿಂದೆ ರಾಜಕೀಯ ನಾಯಕರು ಬೆನ್ನಿಗೆ ನಿಂತಿದ್ದು, ಅಧಿಕಾರಿಗಳ ನಡುವಿನ ಡೊಂಬರಾಟಕ್ಕೆ ಕಾರಣವಾಗಿದೆ.

ಹೀಗೆ ಕ್ಯಾಮರಾ ನೋಡುತ್ತಿದ್ದಂತೆಯೇ ಹೊರಹೋಗುತ್ತಿರುವ ಇವರು ಇನ್ನೇನೂ ಅಧಿಕಾರ ಸ್ವೀಕಾರ ಮಾಡಿ ಎರಡು ದಿನಗಳೇ ಆಗಬೇಕಿತ್ತು. ಆದರೆ ಇತ್ತ ಅಧಿಕಾರವೂ ಇಲ್ಲದೆ. ಹೊಸದಾಗಿ ಬೇರೆ ಕಡೆ ಸ್ಥಳ ಸಿಗದೆ ಓಡಾಡುತ್ತಿರುವ ಇವರ ಹೆಸರು ಇಸ್ಮಾಯಿಲ್ ಸಾಬ್ ಶಿರಹಟ್ಟಿ ಅಂತ. ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಪುನರ್ವಸತಿ ಯೋಜನೆ ಅಧಿಕಾರಿಯಾಗಿದ್ದ ಶಿರಹಟ್ಟಿ ಫೆಬ್ರವರಿ 05 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ವರ್ಗಾವಣೆಯಾಗಿದ್ದಾರೆ. ಆದರೆ ವರ್ಗಾವಣೆಯಾದರೂ ಸಹ ಇಂದಿಗೂ ಅವರಿಗೆ ಕಿಮ್ಸ್ ನ ಆಡಳಿತ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಕಾರ್ಯ ಮಾತ್ರ ನಡೆದಿಲ್ಲ. ಈ ಹಿಂದೆ ಇದ್ದ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಕಚೇರಿಗೆ ಅಗಮಿಸದೆ ಇರುವುದು ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೆ ಬೇಕಂತಲೇ ವರ್ಗಾವಣೆ ಆದೇಶವನ್ನು ತಡೆಯುವ ಎಲ್ಲ ಕಾರ್ಯವನ್ನು ಮಾಡಲಾಗುತ್ತಿದೆ ಎನ್ನುವ ಅನುಮಾನ ಸಹ ಹುಟ್ಟಿಕೊಂಡಿದೆ. ಯಾಕ ಅಂದ್ರೆ ಈಗಾಗಲೇ ಇರುವ ಅದೇಶವನ್ನೇ ಮತ್ತೆ ತಿದ್ದುಪಡಿ ಮಾಡುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.

ಇನ್ನೂ ಶಿರಹಟ್ಟಿ ಜಾಗಕ್ಕೆ ಕಿಮ್ಸ್ ನ ಆಡಳಿತ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾ ಗುಮಾಸ್ತೆ ಎನ್ನುವ ಆಡಳಿತ ಅಧಿಕಾರಿಗೆ ಜೈನಾಪುರ ಇದ್ದ ಸ್ಥಾನವನ್ನು ನೀಡುವುದಕೆ ಸದ್ದಿಲ್ಲದೆ ಕಿಮ್ಸ್ ಆಡಳಿತ ಮಂಡಳಿ ಪ್ಲಾನ್ ಮಾಡಿದೆ. ಸ್ಥಳೀಯ ರಾಜಕೀಯ ನಾಯಕರ ಒಂದು ಗುಂಪು ಸುಮಾ ಪರವಾಗಿ ಲಾಭಿ ನಡೆಸಿದ್ದಾರೆ ಎನ್ನಲಾಗಿದೆ. ಇದೆ ಕಾರಣಕ್ಕೆ ಶಿರಹಟ್ಟಿಯವರಿಗೆ ತಾಂತ್ರಿಕ ಸಮಸ್ಯೆಯಾಗಿದೆ ಅಂತಾ ಹೇಳಿ ಅಧಿಕಾರ ಸ್ವೀಕಾರ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಆ ಉದ್ದೇಶಕ್ಕೆ ಈಗಾಗಲೇ ವರ್ಗಾವಣೆಗೊಂಡಿರುವ ಅಧಿಕಾರಿ ಶಿರಹಟ್ಟಿಯವರಿಗೆ ಅಧಿಕಾರ ಹಸ್ತಾಂತರ ಮಾಡದೆ ಕೇವಲ ಕಾಯಿಸುವ ವಿಚಾರವನ್ನು ಮಾಡಲಾಗುತ್ತಿದೆ. ಈ ಬಗ್ಗೆ ಕೇಳಿದ್ರೆ ಯಾವುದೇ ಪ್ರಶ್ನೆಗೂ ಉತ್ತರ ನೀಡದೆ ಅಧಿಕಾರಿ ಶಿರಹಟ್ಟಿ ಕಾರ್ ಹತ್ತಿ ಹೊರ ನಡೆದಿದ್ದಾರೆ. ಇನ್ನೂ ಈ ಬಗ್ಗೆ ಕಿಮ್ಸ್ ನ ನಿರ್ದೇಶಕ ರಾಮಲಿಂಗಪ್ಪ ಸಹ ಸ್ಪಷ್ಟನೆ ಕೊಟ್ಟಿದ್ದಾರೆ.
ಒಂದು ಕುರ್ಚಿಗಾಗಿ ನಡೆಯುತ್ತಿರುವ ಹಗ್ಗಜಗ್ಗಾಟ ಎಲ್ಲಿಗೆ ಬಂದು ನಿಲ್ಲುತ್ತದೆ ಕಾದು ನೋಡಬೇಕಿದೆ. ಕಿಮ್ಸ್ ನಲ್ಲಿ ಒಂದು ಖುರ್ಚಿಗಾಗಿ ನಡೆಯುತ್ತಿರುವ ಅಧಿಕಾರಿಗಳ ಗುದ್ದಾಟದ ಹಿಂದೆ ರಾಜಕೀಯ ವ್ಯಕ್ತಿಗಳು ಆಟ ಆಡುತ್ತಿರುವುದೆ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ.