Belagavi

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ: ಬೆಳಗಾವಿಯಲ್ಲಿ ಘನಘೋರ ದುರಂತ

Share

ಬೆಳಗಾವಿಯ ಹಿಂಡಲಗಾ ಗಣಪತಿ ಮಂದಿರದ ಮುಂಭಾಗದಲ್ಲಿರುವ ಅರಗನ್ ತಾಲಾಬ್‍ನಲ್ಲಿ ತಾಯಿ ತನ್ನ ಇಬ್ಬರು ಮಕ್ಕಳ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮನಕಲುಕುವ ಘಟನೆ ತಲ್ಲಣ ಮೂಡಿಸಿದೆ.

ಹೌದು ಬೆಳಗಾವಿಯ ಸಹ್ಯಾದ್ರಿ ನಗರದ ನಿವಾಸಿ ಕರಿಷ್ಮಾ ಕೇಶ್ವಾನಿ (37) ಎಂಬ ಮಹಿಳೆ ಶುಕ್ರವಾರ ಅರಗನ್ ತಾಲಾಬ್‍ಗೆ ಕಾರಿ ತನ್ನ ಇಬ್ಬರು ಮಕ್ಕಳು ಭಾವಿರ್(4), ಹಿರನ್(7), ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಂದು ಸಾಯಂಕಾಲ ಮೊದಲ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಎಸ್‍ಡಿಆರ್‍ಎಫ್. ಹಾಗೂ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಯಿ ಹಾಗೂ ಮಗುವಿನ ಮೃತ ದೇಹವನ್ನು ಹೊರತೆಗೆದಿದ್ದಾರೆ. ಇನ್ನೊಂದು ಮೃತ ದೇಹಕ್ಕಾಗಿ ಪೊಲೀಸು ಶೋಧ ಕಾರ್ಯ ನಡೆಸಿದ್ದಾರೆ. ಕ್ಯಾಂಪ್ ಏರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Tags:

error: Content is protected !!