Belagavi

ಅವ್ರು ಚಿಲ್ಲರೇ ಆದ್ರೆ ನಾವು ಚಿಲ್ಲರೆ ಆಗೋಲ್ಲ: ನಿರಾಣಿ ಬ್ರದರ್ಸಗೆ ಕಾಶಪ್ಪನವರ ಟಾಂಗ್..!

Share

ಮುರುಗೇಶ್ ನಿರಾಣಿ ಸಹೋದರರಾದ ಲಕ್ಷ್ಮಣ ನಿರಾಣಿ, ಸಂಗಮೇಶ ನಿರಾಣಿ ನಮ್ಮ ಪೀಠದ ಪರವಾಗಿ ಇರುವವರಿಗೆ ಧಮ್ಕಿ ಹಾಕುತ್ತಿದ್ದಾರೆ. ಅವರ ಮನೆಗೆ ಹೋಗಿ ಹೊಡೆಯುತ್ತೇವೆ ಎಂದು ದೌರ್ಜನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲವೊಂದಿಷ್ಟು ನಮ್ಮ ಸಮಾಜ ಬಾಂಧವರು ನನಗೆ ದೂರು ಕೊಟ್ಟಿದ್ದಾರೆ ಎಂದು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಗಂಭೀರ ಆರೋಪ ಮಾಡಿದ್ದಾರೆ.

: ಬೆಳಗಾವಿಯಲ್ಲಿ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಜಯಾನಂದ ಕಾಶಪ್ಪನವರ ಮುರುಗೇಶ್ ನಿರಾಣಿ ಅವರ ಕೆಲವೊಂದಿಷ್ಟು ಚಮಚಾಗಳು ಮಾತನಾಡುತ್ತಿದ್ದಾರೆ. ಅವರ ಸಹೋದರ ಲಕ್ಷ್ಮಣ ನಿರಾಣಿ ಸ್ಪಷ್ಟವಾಗಿ ನಾವು ಈ ಪೀಠಕ್ಕೆ ಅದನ್ನು ದಾನ ಮಾಡಿದ್ದೇವೆ, ಇದನ್ನು ದಾನ ಮಾಡಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿದ್ದಾರೆ. ಮುರುಗೇಶ್ ನಿರಾಣಿ ಅವರ ಸಹೋದರರಾದ ಲಕ್ಷ್ಮಣ ನಿರಾಣಿ, ಸಂಗಮೇಶ ನಿರಾಣಿ ಯಾರು ನಮ್ಮ ಪೀಠದ ಪರವಾಗಿ ಬರುತ್ತಾರೆ ಅವರಿಗೆ ಧಮ್ಕಿ ಹಾಕುವುದು, ಅವರ ಮನೆಗೆ ಹೋಗಿ ಹೊಡೆಯುತ್ತೇವೆ ಎಂದು ನಮ್ಮ ಬಾಗಲಕೋಟೆ ಜಿಲ್ಲೆಯಲ್ಲಿ ದೌರ್ಜನ್ಯ ಮಾಡಿದ್ದಾರೆ. ಈ ಬಗ್ಗೆ ನಮ್ಮ ಸಮಾಜ ಬಾಂಧವರು ನನಗೆ ದೂರು ಕೊಟ್ಟಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇಂತಹವುಗಳನ್ನು ಕೊಟ್ಟಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಸಮಾಜ ನೊಂದಿದೆ, ಪೂಜ್ಯರಿಗೆ ಹೇಳಿ ಅವುಗಳನ್ನು ಮರಳಿ ಕೊಡುವ ಕೆಲಸ ಮಾಡಿ ಎಂದು ಹೇಳಿದ್ದಕ್ಕೆ ನಿರ್ಣಯ ತೆಗೆದುಕೊಂಡಿದ್ದೇವೆ ಎಂದರು.

ನಮ್ಮ ಸಮಾಜದ ಕೆಲವೊಂದಿಷ್ಟು ಬಂಧುಗಳಿಗೆ ಧಮ್ಕಿ ಕೊಟ್ಟಿದ್ದಾರೆ. ಅವರು ಕೂಡ ನಮ್ಮ ಸಮಾಜದವರೇ ಎನ್ನುವ ಕಾರಣಕ್ಕೆ ಸಹನೆ ತೆಗೆದುಕೊಂಡಿದ್ದೇವೆ. ಅವರು ರಸ್ತೆ ಮೇಲೆ ನಿಂತಿದ್ದಾರೆ ನಾವು ರಸ್ತೆಯಲ್ಲಿ ನಿಂತಿಲ್ಲ. ಅವರು ಚಿಲ್ಲರೆಗಳಾದರೆ ನಾವು ಚಿಲ್ಲರೆ ಆಗೋಕೆ ನಿಂತಿಲ್ಲ. ದೊಡ್ಡ ಸಮಾಜವಿದೆ, ಸಮಾಜದಲ್ಲಿ ಅವರು ಕೂಡ ನಮ್ಮ ಅಣ್ಣತಮ್ಮಂದಿರೇ. ತಪ್ಪು ಮಾಡಿದ್ದಾರೆ ಎಂದರೆ ಅವರಿಗೆ ಹೇಳುವ ಶಕ್ತಿ ಗುರುಗಳಿಗಿದೆ. ಆ ಗುರುಗಳಿಗೆ ಹೇಳುವುದನ್ನು ಬಿಟ್ಟಿದ್ದೇವೆ. ಇದೇ ರೀತಿ ತಪ್ಪು ಮಾಡುತ್ತಾ ಹೋದರೆ ಸಮಾಜ ತಕ್ಕ ಪಾಠ ಕಲಿಸುತ್ತದೆ. ಗುರುಗಳ ವಿರುದ್ಧ ಆರೋಪ ಮಾಡಿದ್ದಕ್ಕೆ ಇಂದಿನ ಸಭೆಯಲ್ಲಿ ಅವರ ವಿರುದ್ಧ ನಿರ್ಣಯ ತೆಗೆದುಕೊಂಡಿದ್ದೇವೆ ಎಂದರು.

ಕಾಶಪ್ಪನವರ ತಂದೆಯವರೇ 2ನೇ ಪೀಠ ಮಾಡಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಯಿಸಿದ ವಿಜಯಾನಂದ ಕಾಶಪ್ಪನವರ 27 ವರ್ಷದ ಹಿಂದೆ ಪಂಚಮಸಾಲಿ ಸಂಘಟನೆ, ಸಮಾಜವನ್ನು ಕಟ್ಟಿದವರು ನಮ್ಮ ತಂದೆಯವರು. ಅದೇ ಕಾರಣಕ್ಕಾಗಿ ಸಮಾಜಕ್ಕೆ ಸಾಮಾಜಿಕ ನ್ಯಾಯಕ್ಕೋಸ್ಕರ ಹೋರಾಟ ಮಾಡಲು ಸ್ವಾಮೀಜಿಯವರ ನೇತೃತ್ವದಲ್ಲಿ ನಾನು ಗಟ್ಟಿಯಾಗಿ ನಿಂತಿದ್ದೇನೆ. ಸಮಾಜಕ್ಕೆ ನ್ಯಾಯ, 2ಎ ಮೀಸಲಾತಿ ಸಿಗಬೇಕು. ಇದು ವಯಕ್ತಿಕವಾಗಿ ಮಂತ್ರಿ ಮಾಡಲು, ಸಿಎಂ ಮಾಡಲು ಪೀಠ ಕಟ್ಟಿಲ್ಲ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಒಟ್ಟಿನಲ್ಲಿ ನಿರಾಣಿ ಬ್ರದರ್ಸ ವಿರುದ್ಧ ಸುದ್ದಿಯೋಷ್ಠಿಯುದ್ದಕ್ಕೂ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ಮಾಡಿದ್ದಾರೆ.

 

 

 

 

Tags:

error: Content is protected !!