Kagawad

ಅಂದು ಮುತ್ತಿಗೆ ಇಂದು ಸತ್ಕಾರ: ಇಂಜಿನಿಯರ್‍ಗೆ ಐನಾಪುರ ರೈತರಿಂದ ಸನ್ಮಾನ

Share

ಕಾಗವಾಡ ತಾಲೂಕಿನ ಐನಾಪುರ ಏತ ನೀರಾವರಿ ಯೋಜನೆಯ ಮೂಲಕ ನೀರೋದಗಿಸುವ ಮೇಲು ಸೇತುವೆ ಸೋರಿಕೆ ಮುಖ್ಯ ಕಾಲುವೆ ದುರಸ್ತಿಗೊಳಿಸಲು 4.99 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಅನುದಾನ ಮಂಜೂರುಗೊಳಿಸಲು ವಿಶೇಷ ಪ್ರಯತ್ನ ಮಾಡಿರುವ ಅಭಿಯಂತರ ಕೆ.ರವಿ. ಅವರನ್ನು ಅದಕ್ಕಾಗಿ ರೈತ ಮುಖಂಡರು ಸತ್ಕರಿಸಿ ಗೌರವಿಸಿದರು.

ಬುಧವಾರ ಐನಾಪುರದ ರೈತ ಮುಖಂಡರು ಹಾಗೂ ಪಟ್ಟಣ ಪಂಚಾಯತ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ,ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ ಸೇರಿದಂತೆ ಅನೇಕ ಮುಖಂಡರು ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ರವಿ ಅವರಿಗೆ ಸನ್ಮಾನಿಸಿ ಧನ್ಯವಾದಗಳನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಅರುಣ ಗಾಣಿಗೇರ ಕಳೆದ 12 ವರ್ಷಗಳಿಂತ ಈ ಯೋಜನೆ ಪ್ರಾರಂಭಗೊಂಡಿದೆ. ಕಳಪೆ ಮಟ್ಟದ ಕಾಮಗಾರಿಯಾಗಿರುವದರಿಂದ ಮೇಲ್ ಕಾಲುವೆ ನಿರಂತವಾಗಿ ಸೋಕಿಯಾಗುತ್ತಿತ್ತು. ಇದರಿಂದ ಐನಾಪುರ ಪಟ್ಟಣದ ನೂರಾರು ಎಕರೆ ಕ್ಷೇತ್ರದಲ್ಲಿ ನೀರು ನುಗ್ಗಿ ರೈತರ ಜಮೀನುಗಳು ಹಾಳಾಗಿದ್ದವು. ಈ ಕುರಿತಂತೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಮೊನ್ನೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ದರು. ಈ ಅಧಿಕಾರಿಗಳು ರೈತರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಇವರೊಬ್ಬ ಬೇಜವಾಬ್ದಾರಿ ಅಧಿಕಾರಿಗಳು ಎಂದು ನಾನು ಕೂಡ ಹೇಳಿಕೆ ನೀಡಿದ್ದೆ. ಆದರೆ ಅವರು ಕೇವಲ 20 ದಿನಗಳಲ್ಲಿ 5 ಕೋಟಿ ರೂ. ಅನುದಾನ ಮಂಜೂರು ಮಾಡಿಸಿಕೊಂಡು ಬಂದು ತಾವು ಬೇಜವಾಬ್ದಾರಿ ಅಧಿಕಾರಿಯಲ್ಲ, ತಾನೊಬ್ಬ ಜವಾಬ್ದಾರಿಯುತ ಅಧಿಕಾರಿ ಎಂದು ಕೆ.ರವಿ ಅವರು ಸಾಬೀತು ಪಡಿಸಿದ್ದಾರೆ. ಅವರಿಗೆ ರೈತ ಸಮುದಾಯದ ವತಿಯಿಂದ ಅಭಿನಂಧನೆಗಳನ್ನು ಸಲ್ಲಿಸುತ್ತೇವೆ ಎಂದರು.

ನಂತರ ಅಭಿಯಂತರ ಕೆ.ರವಿ ಮಾತನಾಡಿ ಮುಖ್ಯ ಕಾಲುವೆ ನೀರು ಸೋರಿಕೆಯಿಂದ ರೈತರಿಗೆ ತೊಂದರೆಯಾಗಿತ್ತು. ರೈತರು ಪ್ರತಿಭಟನೆ ಕೈಗೊಂಡಿದ್ದರು. ಬೇಡಿಕೆಗಳು ಸೂಕ್ತವಾಗಿರುವದರಿಂದ ಹಿರಿಯ ಅಧಿಕಾರಿಗಳಿ 4.99 ಕೋಟಿ ರೂ ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು ಬರುವ ವರ್ಷದೊಳಗಾಗಿ ರಿಪೇರಿಗೊಳಿಸುವುದಾಗಿ ಭರವಸೆ ನೀಡಿದರು.

ಇನ್ ವಾಹಿನಿಯಲ್ಲಿ ರೈತರ ಸಮಸೆಗಳ ಬಗ್ಗೆ ಸವಿಸ್ತಾರವಾಗಿ ಸುದಿ ಬಿತ್ತರಿಸಿಸಲಾಗಿತ್ತು. ಈ ಸುದ್ದಿಗೆ ಸ್ಪಂದಿಸಿದ ರಾಜ್ಯಸರ್ಕಾರದ ಹಿರಿಯ ಅಧಿಕಾರಿಗಳು ಅನುದಾನ ಮಂಜೂರು ಗಳಿಸುವುದರಿಂದ ನಮ್ಮ ಇನ್ ಇನ್ಯೂಸ್ ವಾಹಿನಿಗೆ ರೈತರು ಇದೇ ವೇಳೆ ಧನ್ಯವಾದ ಸಲ್ಲಿಸಿದರು.

ಈ ವೇಳೆ ರಾಜೇಂದ್ರ ಪೆÇೀತದಾರ, ಆಧಿನಾಥ ದಾನೊಳ್ಳಿ, ಅರವಿಂದ ಕಾರ್ಚಿ, ಸುರೇಶ ಅಡಿಸೇರಿ ಸೇರಿದಂತೆ ಅಭಿಯಂತರರಾದ ಪ್ರಶಾಂತ ಪೆÇೀತದಾರ, ಸಾಗರ ಪವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!