Belagavi

ಸೈನಿಕ ಶಾಲೆ ಪ್ರವೇಶಾತಿ ಪರೀಕ್ಷೆಯಲ್ಲಿ ಗೋಲ್‍ಮಾಲ್: ಇಬ್ಬರು ವಿದ್ಯಾರ್ಥಿಗಳು ಅನರ್ಹ

Share

ಸೈನಿಕ ಶಾಲೆ ಪ್ರವೇಶಾತಿ ಪರೀಕ್ಷಾ ಕೇಂದ್ರದಲ್ಲಿ ಗೋಲ್‍ಮಾಲ್ ಆರೋಪಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಂದ ಇಬ್ಬರು ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಅನರ್ಹಗೊಳಿಸಿರುವ ಘಟನೆ ಬೆಳಗಾವಿಯಲ್ಲಿ ಕಂಡು ಬಂದಿದೆ.

ಹೌದು ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸೈನಿಕ ಶಾಲೆ ಪ್ರವೇಶಾತಿ ಪರೀಕ್ಷೆ ರವಿವಾರ ನಡೆಯುತ್ತಿತ್ತು. ಈ ವೇಳೆ ಕಾಡಾ ಆಡಳಿತಾಧಿಕಾರಿ ಶಶಿಧರ್ ಕುರೇರ್ ಪುತ್ರಿ ಸೇರಿ ಐವರು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಅವಧಿಗೂ ಮುನ್ನವೇ ಸರ್ಕಾರಿ ಅಧಿಕಾರಿಗಳ ಮಕ್ಕಳಿಗೆ ಪ್ರಶ್ನೆಪತ್ರಿಕೆ, ಓಎಂಆರ್ ಶೀಟ್ ನೀಡಿದ ಆರೋಪ ಕೇಳಿ ಬಂದಿತ್ತು. ಇದನ್ನು ಖಂಡಿಸಿ ಇನ್ನುಳಿದ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆಗೆ ಮುಂದಾದರು. ಕೆಎಎಸ್ ಅಧಿಕಾರಿ ಶಶಿಧರ್ ಕುರೇರ್, ಶಾಲಾ ಪ್ರಾಂಶುಪಾಲರನ್ನು ಪೆÇೀಷಕರು ತರಾಟೆಗೆ ತಗೆದುಕೊಂಡರು.

ಪೆÇೀಷಕರ ಪ್ರತಿಭಟನೆ ಬೆನ್ನಲ್ಲೇ ಪರೀಕ್ಷಾ ಕೇಂದ್ರಕ್ಕೆ ಬಿಇಒ ರವಿ ಭಜಂತ್ರಿ ಭೇಟಿ ನೀಡಿ ಇಬ್ಬರು ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಅನರ್ಹಗೊಳಿಸಿ ಕಳಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೆÇೀಷಕರ ಒತ್ತಾಯಿಸಿದರು.

ಇನ್ನು ಪೆÇೀಷಕರ ಆರೋಪವನ್ನು ಕೆಎಎಸ್ ಅಧಿಕಾರಿ ಶಶಿಧರ್ ಕುರೇರ್ ಅಲ್ಲಗಳೆದಿದ್ದಾರೆ. ಮಗಳಿಗೆ ಕೋವಿಡ್ ಗುಣಲಕ್ಷಣವಿತ್ತು ಹೀಗಾಗಿ ಒಂದು ಗಂಟೆ ಮುಂಚೆ ಬಂದಿದ್ದೆ. ಒಂದು ಗಂಟೆ ಮುಂಚೆ ಬಂದು ಕೋವಿಡ್ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಬಗ್ಗೆ ವಿಚಾರಿಸಿದ್ದೆ. ಕೋವಿಡ್ ಗುಣಲಕ್ಷಣ ಇರುವವರಿಗಿದ್ದ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಿದ್ರು. ಅದನ್ನ ಪಾಲಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.

 

 

 

Tags:

error: Content is protected !!