ಉತ್ತರ ಕರ್ನಾಟಕ ಭಕ್ತರ ಅನುಕೂಲಕ್ಕಾಗಿ ಶೀಘ್ರವೇ ಸುಕ್ಷೇತ್ರ ಶ್ರೀಶೈಲನಲ್ಲಿ ಕರ್ನಾಟಕ ಯಾತ್ರಿ ನಿವಾಸವನ್ನು ನಿರ್ಮಾಣ ಮಾಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು..

ಅವರು ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀವೀರಭದ್ರೇಶ್ವರ,ಭದ್ರಕಾಳೇಶ್ವರಿ ದೇವಿಯ ಹಾಗೂ ಶ್ರಿಶೈಲ್ ಜದ್ಗುರುಗಳ ದರ್ಶನವನ್ನು ಪಡೆದುಕೊಂಡು ನಂತರ ಇನ್ ನ್ಯೂಸ್ ಜೊತೆ ಮಾತನಾಡಿ ಸಚಿವೆ ಶಶಿಕಲಾ ಜೊಲ್ಲೆಯವರು ಶ್ರಿಶೈಲ ಮಲ್ಲಿಕಾರ್ಜುನ ಇದು 12 ಜ್ಯೋರ್ತಿಲಿಂಗಳಲ್ಲಿ ಪವಿತ್ರವಾದ ಸ್ಥಾನ ಈ ಒಂದು ದೇವಸ್ಥಾನಕ್ಕೆ ನಮ್ಮ ಉತ್ತರ ಕರ್ನಾಟಕದ ಭಾಗದ ಬಹಳಷ್ಟು ಭಕ್ತರು ಕಂಬಿಗಳನ್ನು ತೆಗೆದುಕೊಂಡು ಶ್ರೀಶೈಲ ಮಲ್ಲಿಕಾರ್ಜುನರ ದರ್ಶನವನ್ನು ಪಡೆದುಕೊಳ್ಳಲು ಹೋಗುತ್ತಾರೆ.ಈ ಹಿನ್ನಲೆಯಲ್ಲಿ ಭಕ್ತರಿಗೆ ಅಲ್ಲಿ ಉಳಿದುಕೊಳ್ಳಲು ಹಾಗೂ ಕಂಬಿಗಳನ್ನು ಇಡಲು,ಶ್ರಿಶೈಲನಲ್ಲಿ ಕರ್ನಾಟಕದ ಯಾತ್ರಿ ನಿವಾಸವನ್ನು ನಿರ್ಮಿಸುವು ಬಗ್ಗೆ ಶ್ರೀಶೈಲ್ ಜಗದ್ಗುರುಗಳ ಚರ್ಚೆಯನ್ನು ನಡೆಸಿದ್ದೆನೆ..ಶ್ರಿಶೈಲ್ ನಲ್ಲಿ ಕರ್ನಾಟಕದ ಯಾತ್ರಿ ನಿವಾಸ ಆಗಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ..ಮುಂಬರುವ ದಿನಗಳಲ್ಲಿ ಶ್ರಿಶೈಲ್ ನಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಭರವಸೆಯನ್ನು ನೀಡಿದರು..
ಈ ಸಂಧರ್ಭದಲ್ಲಿ ಅಜಯ ಸೂರ್ಯವಂಶಿ,ಅಮರ ಬೋರಗಾಂವೆ,ಮನೋಜ ಕಿಚಡೆ,ಸಚಿನ ಪಾಟೀಲ, ಅಪ್ಪು ವನಿರೆ,ಈರಣ್ಣಾ ಅಮ್ಮಣಗಿ,ಧೊಂಡಿರಾಮ ಬೆಡಗೆ,ದೀಪಕ ಇನಾಮದಾರ,ನರಸಗೌಡ ಪಾಟೀಲ, ಮಂಜುನಾಥ ದೊಡ್ಡಮನಿ,ನರಸೌಡ ಪಾಟೀಲ ಸೇರಿದಂತೆ ಶಿವತೇಜ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು..