Vijaypura

ವಿಜಯಪುರದಲ್ಲಿ ಸ್ವಚ್ಛ ನಗರಕ್ಕೆ ಯುವಕರ ಸಂಕಲ್ಪ: ಬಿಡುವಿನ ವೇಳೆಯಲ್ಲಿ ಸ್ವಚ್ಛತೆ ಜೊತೆಗೆ ವಿದ್ಯಾರ್ಥಿಗಳಿಗೆ ಇತಿಹಾಸ ಪರಿಚಯಿಸೋ ಗೀಳು

Share

ಗುಮ್ಮಟ ನಗರಿ ವಿಜಯಪುರದಲ್ಲಿ ಯುವಕರ ತಂಡವೊಂದು ಸ್ವಚ್ಛ ನಗರಕ್ಕಾಗಿ ಟೊಂಕ ಕಟ್ಟಿ ನಿಂತಿದೆ. ದುಡಿದ ಹಣದಲ್ಲಿ ಅಲ್ಪ ಹಣ ಸ್ವಚ್ಛ ನಗರಕ್ಕಾಗಿ ಬಳಸುತ್ತಿದ್ದು, ರಜಾದಿನದಲ್ಲಿ ಬಸ್ ನಿಲ್ದಾಣ, ಮಾರುಕಟ್ಟೆ, ಐತಿಹಾಸಿಕ ಭಾವಿಗಳನ್ನು ಅಂದ ಚಂದಗೊಳಿಸಲು ತೊಡಗಿಕೊಂಡಿದ್ದಾರೆ. ಈ ಕುರಿತು ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ಗುಮ್ಮಟ ನಗರಿ ವಿಜಯಪುರದಲ್ಲಿ ಯುವಕರು ತಂಡವೊಂದು ಸಂಕಲ್ಪ ಮಾಡಿದೆ. ಅದೇನಂದ್ರೆ ಐತಿಹಾಸಿಕ ವಿಜಯಪುರ ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಸೋದು. 15 ಜನ ಸಮಾನ ಮನಸ್ಕ ಯುವಕರು ಸೇರಿಕೊಂಡು ಗಾನಯೋಗಿ ಸಂಘ ಕಟ್ಟಿಕೊಂಡಿದ್ದಾರೆ. ಇವರಾರು ಕೂಡಾ ಸರ್ಕಾರಿ ಕೆಲಸ ಮಾಡುತ್ತಿಲ್ಲ, ವಿವಿಧೆಡೆ ಖಾಸಗಿ ಉದ್ಯೋಗಿಗಳಾಗಿ ದುಡಿಮೆ ಮಾಡಿ, ಅಲ್ಪ ಹಣ ಸಮಾಜ ಸೇವೆಗೆ ಮೀಸಲಿಟ್ಟು ಪ್ರತಿ ರವಿವಾರ ಸ್ವತಃ ಸ್ವಚ್ಛತಾ ಕಾರ್ಯಕ್ಕಿಳಿಯುತ್ತಾರೆ. ನಗರದಲ್ಲಿರೋ ಬಸ್ ನಿಲ್ದಾಣ ಶುಚಿಗೊಳಿಸಿ, ಬಣ್ಣದಿಂದ ಅಂದಗೊಳಿಸ್ತಾರೆ. ಜೊತೆಗೆ ನಮ್ಮ ಇತಿಹಾಸವನ್ನು ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಪರಿಚಿಯಿಸೋ ಕಾರ್ಯ ಮಾಡ್ತಿದ್ದಾರೆ. ಆದಿಲ್ ಶಾಹಿ ನೆಲೆದಲ್ಲಿ ಇಮ್ಮಡಿ ಪುಲಿಕೇಶಿ ಸಾಧನೆ ಬೋರ್ಡ್ ಹಾಕಿ ಬಸ್ ನಿಲ್ದಾಣದಲ್ಲಿ ಜನರು ಕುಳಿತಾಗ ಓದಿ ಇತಿಹಾಸ ಅರಿತುಕೊಳ್ಳಲಿ ಅನ್ನೋದು ಯುವಕರ ಆಶಯ…

ಇನ್ನು ಗಾನಯೋಗಿ ಸಂಘದ ಯುವಕರು ವಿಜಯಪುರ ನಗರದಲ್ಲಿರೋ ಪುರಾತನ ಬಾವಿ ಈಗಾಗಲೇ ಶುಚಿಗೊಳಿಸಿದ್ದಾರೆ, ಜೊತೆಗೆ ಮಾರುಕಟ್ಟೆ ಶುಚಿಗೊಳಿಸಿ ಮಹನೀಯರ ಚಿತ್ರಗಳನ್ನು ಬಿಡಿಸಿದ್ದಾರೆ. ಗುಂಡಿ ಬಿದ್ದಿರೋದು ಕಂಡ್ರೆ ಅದನ್ನು ಮುಚ್ಚುವ ಕೆಲ್ಸ ಕೂಡಾ ಮಾಡುತ್ತಾರೆ. ರಜಾ ದಿನಗಳನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಳ್ತಿದ್ದಾರೆ. ಯುವಕರು ಮೊಬೈಲ್ ನಲ್ಲಿ ಕಾಲಹರಣ ಮಾಡದೇ, ತಮ್ಮ ಸುತ್ತಲಿನ ಪ್ರದೇಶ ಶುಚಿಯಾಗಿಸಿದ್ರೆ ಸ್ವಚ್ಛ ಭಾರತದ ಕನಸು ಸಾಕಾರವಾಗುತ್ತೆ, ವಿಜಯಪುರ ಐತಿಹಾಸಿಕ ನಗರ. ಈ ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಸಲು ಪಣತೊಟ್ಟಿದ್ದೇವೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕಾರ್ಯದ ಮೂಲಕ ಯುವಕರಿಗೆ ಪ್ರೇರಣೆ ನೀಡುತ್ತಿದ್ದೇವೆ ಅಂತಿದ್ದಾರೆ ತಂಡದ ಮುಖ್ಯಸ್ಥ…

ಒಟ್ಟಿನಲ್ಲಿ ಎಲ್ಲವೂ ಸರ್ಕಾರವೇ ಮಾಡ್ಲಿ ಅಂತ ಯುವಕರು ಕೈಕಟ್ಟಿ ಕುಳಿತು ಕೊಳ್ಳದೇ ಸ್ವಚ್ಛತಾ ಕಾರ್ಯ ಮಾಡ್ತಿದ್ದಾರೆ. ಯುವಕರ ತಂಡ ದುಡಿಮೆ ಹಣದಲ್ಲಿ ಸ್ವಚ್ಛ ನಗರ ಕನಸು ನನಸು ಮಾಡುವತ್ತ ಹೆಜ್ಜೆಯಿಟ್ಟಿದೆ. ಇವರ ಕಾರ್ಯಕ್ಕೆ ನಾವು ಕೂಡಾ ಶಹಬ್ಬಾಶ್ ಎನ್ನಲೇ ಬೇಕು…

Tags:

error: Content is protected !!