ರಾಜ್ಯದಲ್ಲಿ ಇಂದು ಮತ್ತೆ ಮಹಾಮಾರಿ ಕೊರೊನಾ ಸ್ಫೋಟವಾಗಿದ್ದು. ಹೊಸದಾಗಿ 12 ಸಾವಿರ ಪಾಸಿಟಿವ್ ಕೇಸ್ಗಳು ದೃಢಪಟ್ಟಿವೆ.

ಹೌದು ರವಿವಾರ ಮತ್ತೆ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ. ಇಂದಿನ ಬುಲೆಟಿನ್ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು. 12 ಸಾವಿರ ಪಾಸಿಟಿವ್ ಕೇಸ್ಗಳು ಹೊಸದಾಗಿ ಕಂಡು ಬಂದಿವೆ. ಅದೇ ರೀತಿ ಬೆಂಗಳೂರಿನಲ್ಲಿಯೇ 9020 ಕೇಸ್ಗಳು ದೃಢಪಟ್ಟಿವೆ. ಇಂದು ಶೇ.6.33ರಷ್ಟು ಪಾಸಿಟಿವಿಟಿ ರೇಟ್ ದಾಖಲಾಗಿದೆ. ರಾಜ್ಯದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಇಬ್ಬರು ಮೃತರಾಗಿದ್ದಾರೆ. ಇಂದು 901 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 49,602 ಆಕ್ಟಿವ್ ಕೇಸ್ಗಳು ಬಾಕಿಯಿವೆ ಎಂದು ತಿಳಿಸಿದ್ದಾರೆ.