ರಾಜ್ಯಾದ್ಯಂತ ಕೋವಿಡ್ ಮಹಾಮಾರಿ ಸೊಂಕು ವ್ಯಾಪಕವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ವಿಕೆಂಡ್ ಕಪ್ರ್ಯೂ ಜಾರಿ ಮಾಡಿದ್ದು, ಸಾರ್ವಜನಿಕರು ಮಾತ್ರ ಖ್ಯಾರೆ ಎನ್ನುತ್ತಿಲ್ಲ.

ಗಾಂಧೀನಗರದ ಜೈ ಕಿಸಾನ್ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ರಾಜ್ಯಾದ್ಯಂತ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೊಂಕು ತಡೆಗಟ್ಟಲು ಸರ್ಕಾರವು ವಿಕೇಂಡ್ ಕಪ್ರ್ಯೂ ಜಾರಿಗೊಳಿಸಿದೆ,
ಆದರೆ ಸಾರ್ವಜನಿಕರು ಮಾತ್ರ ದಿನಸಿ, ತರಕಾರಿ, ಹಣ್ಣು ಹಂಫಲ್ ಹೀಗೆ ದಿನ ಬಳಕೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾಸ್ಕ್ ಧರಿಸದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಮಾರುಕಟ್ಟೆಯಲ್ಲಿ ಮುಗಿ ಬಿದ್ದಿದ್ದಾರೆ.