ಬೆಳಗಾವಿಯಲ್ಲಿ ಶಾಂತಿ ಕದಡುವ ಸಂದರ್ಭದಲ್ಲಿ ಅಮಾಯಕರನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸುವ ನೀತಿಯನ್ನು ಶ್ರೀ ಶಿವಪ್ರತಿμÁ್ಠನ ಹಿಂದೂಸ್ತಾನ ತಳ್ಳಿಹಾಕಿದೆ.

ಗುರುವಾರ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿದ ಶ್ರೀ ಶಿವಪ್ರತಿμÁ್ಠನ ಹಿಂದೂಸ್ಥಾನದ ಮುಖ್ಯಸ್ಥರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅಪವಿತ್ರಗೊಳಿಸಿದ ನಂತರ ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಈ ನೀತಿಯನ್ನು ಅಲ್ಲಗಳೆಯಲು ಸಭೆ ಕರೆಯಲಾಗಿತ್ತು. ಈ ಅಹಿತಕರ ಘಟನೆ ನಡೆದ ನಂತರ ಅಮಾಯಕ ವಿದ್ಯಾರ್ಥಿ ಮತ್ತು ಯುವಕರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಆದರೆ ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಅಮಾಯಕರನ್ನು ಬಿಡುಗಡೆ ಮಾಡುವಂತೆ ಶ್ರೀ ಶಿವಪ್ರತಿμÁ್ಠನ ಹಿಂದೂಸ್ಥಾನದ ಅಧ್ಯಕ್ಷ ಕಿರಣ ಗಾವಡೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಶಿವಪ್ರತಿμÁ್ಠನ ಹಿಂದೂಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.