Belagavi

ನಾಗನೂರು ರುದ್ರಾಕ್ಷಿ ಮಠದಲ್ಲಿ ವಚನ ಸಾಹಿತ್ಯದ ಡಿಜಿಟಲೀಕರಣಕ್ಕೆ ಡಾ. ಅಲ್ಲಮಪ್ರಭು ಸ್ವಾಮಿಜಿ ಚಾಲನೆ

Share

ಕನ್ನಡ ಸಾಹಿತ್ಯ ಹಾಗೂ ವಚನ ಸಾಹಿತ್ಯವನ್ನು ಉಳಿಸುವ ಉದ್ದೇಶದಿಂದ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ತಾಳೆಪತ್ರಗಳ ಡಿಜಟಲೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಜಿ ಹೇಳಿದ್ದಾರೆ.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ವಚನ ಅಧ್ಯೆಯನ ಕೇಂದ್ರದಲ್ಲಿ ಸುಮಾರು 400ರಿಂದ 500 ವರ್ಷಗಳ ಹಳೆದ ತಾಳೆ ಪತ್ರಗಳ ಡಿಜಟಲೀಕರಣಕ್ಕೆ ಚಾಲನೆ ನೀಡಲಾಗಿದೆ. ಅಶೋಕ್ ದೇಮನೂರು ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ಕೆ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಜಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸ್ವಾಮಿಜಿಗಳು, ನಮ್ಮ ಕನ್ನಡ ಸಾಹಿತ್ಯದ ಇತಿಹಾಸವನ್ನು ಉಳಿಸಿವ ಕಾರ್ಯವನ್ನು ಅಶೋಕ ದೊಮನೂರರು ಮಾಡುತ್ತಿದ್ದಾರೆ. ಹಲವು ಲಕ್ಷ ತಾಳೆಗರಿ ಪ್ರತಿಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಸಾಹಿತ್ಯವನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ನಾಗನೂರು ರುದ್ರಾಕ್ಷಿ ಮಠದ ವಚನ ಅಧ್ಯೆಯನ ಕೇಂದ್ರದಲ್ಲಿ ನಡೆಯುತ್ತಿರುವ ಈ ಕಾರ್ಯದಲ್ಲಿ ಸಾಹಿತ್ಯಿಕವಾಗಿ ಕೆಲಸ ಮಾಡಬೇಕೆಂದು ಇಚ್ಛಿಸುವವರು ಸೇವೆ ಮಾಡಲು ಮುಂದೆ ಬರುವಂತೆ ಸ್ವಾಮಿಜಿಗಳು ಕರೆ ನೀಡಿದರು.

ಇನ್ನು ಈ ವೇಳೆ ಮಾತನಾಡಿದ ಲಿಂಗಾಯತ ನಾಯಕರಾದ ಶಂಕರ ಗುಡಸ್, ತಾಳೆ ಪ್ರತಿಗಳನ್ನು ಡಿಜಿಟಲ್ ಮಾಡಬೇಕೆಂಬುದು ಶ್ರೀಗಳ ಉದ್ದೇಶವಾಗಿದೆ. ಹಾಗಾಗಿ ಡಿಜಟಲೀಕರಣ ಕಾರ್ಯ ಪ್ರಾರಂಭಿಸಿದ್ದೇವೆ. ಈ ತಾಳೆ ಗರಿಗಳು ಸುಮಾರು 400 ವರ್ಷಗಳಷ್ಟು ಹಿಂದಿನವು. ಇವು ಹಾಳಾದರೆ ಇತಿಹಾಸ ನಮಗೆ ಮರಳಿ ಸಿಗುವುದಿಲ್ಲ. ಹಾಗಾಗಿ ಶ್ರೀಗಳ ಆಶಯದಂತೆ ಡಿಜಟಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇನ್ನು ಇದಕ್ಕೆ ಸ್ವಯಂ ಸೇವಕರು ಬೇಕಾಗಿದ್ದಾರೆ. 20 ದಿನಗಳ ಕಾಲ ನಡೆಯಲಿರುವ ಕಾರ್ಯದಲ್ಲಿ ಕನ್ನಡಾಭಿಮಾನಿಗಳು, ವಚನ ಸಾಹಿತ್ಯದ ಅಭಿಮಾನಿಗಳು ಭಾಗಿಯಾಗಬೇಕೆಂದು ಮನವಿ ಮಾಡಿದರು.

ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ಹಾಗೂ ಕನ್ನಡ ಸಾಹಿತ್ಯದ ಇತಿಹಾಸ ಉಳಿಸುವ ದೃಷ್ಟಿಯಿಂದ ಈ ಡೀಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇನ್ನು ಸ್ವಯಂ ಸೇವಕರು ಬೇಕಾಗಿದ್ದು ಆಸಕ್ತರು ಭಾಗಿಯಾಗುವಂತೆ ಕೋರಲಾಗಿದೆ.

Tags:

error: Content is protected !!