Athani

ಚಾಲಕನ ಪುತ್ರ ಇಂದು ಐಪಿಎಸ್ ಅಧಿಕಾರಿ

Share

ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು, ಸತತ ಪರಿಶ್ರಮ, ಸತತ ಓದು ಗುರುವಿಲ್ಲದೆಯೂ ನಮ್ಮ ಗುರಿಯನ್ನು ತಲುಪಲು ಸಹಕಾರಿ ಅನ್ನುವುದನ್ನ ಚಾಲಕನ‌ ಮಗ ಇಂದು ಸಾಧನೆ ಮಾಡುವುದರ ಮೂಲಕ ಆ ಗ್ರಾಮದ ಹೆಮ್ಮೆಯ ಜೊತೆಗೆ ತಂದೆ ತಾಯಿಯ ಗೌರವವನ್ನು ಹೆಚ್ಚಿಸಿದ್ದಾನೆ ಜಗದೀಶ ಅಡಹಳ್ಳಿ ಇಂದು ಐಎಎಸ್ ಅಧಿಕಾರಿಯಾಗುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.

ಈ ಪೋಟೊದಲ್ಲಿ ಕಾಣುತ್ತಿರುವ ವ್ಯಕ್ತಿ ಜಗದೀಶ ಅಡಹಳ್ಳಿ ಕೇವಲ 29 ವರ್ಷದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 440 ನೇ ರ್ಯಾಂಕ ಪಡೆದು ಸದ್ಯ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಜನಿಸಿದ್ದು, ಜಗದೀಶ ಅಡಹಳ್ಳಿ ಮಧ್ಯಮ ವರ್ಗದ ಶ್ರೀಕಾಂತ ಹಾಗೂ ಸುಮಿತ್ರಾ ಅಡಹಳ್ಳಿ ದಂಪತಿಯ ನಾಲ್ವರು ಮಕ್ಕಳಲ್ಲಿ ಜಗದೀಶ ಕಿರಿಯ ಪುತ್ರ. 29 ವರ್ಷದಲ್ಲಿ ದೊಡ್ಡ ಹುದ್ದೆ ಪಡೆಯುವ ಮೂಲಕ ಗ್ರಾಮ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಮೋಳೆಯ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ಜಗದೀಶ, 80.06% ಅಂಕ ಗಳಿಸಿದ್ದು, ಪಿಯುಸಿ ಅಥಣಿ ತಾಲೂಕಿನ ಜಾಧವಜಿ ಆನಂದಜಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 89% ಅಂಕ ಪಡೆದಿದ್ದರು. ಪದವಿಯನ್ನು ಬೆಳಗಾವಿಯ ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ 87% ಅಂಕಗಳೊಂದಿಗೆ ಪದಿಯಲ್ಲಿ ತೇರ್ಗಡೆಯಾಗಿ 2014 ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ ಪಡೆದಿದ್ದಾರೆ. ಬಡವನಾಗಿ ಹುಟ್ಟಿದ ಜಗದೀಶ ಅವರು ತಂದೆ ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ದಿನ ಜಗದೀಶ ತನ್ನ ತಂದೆ ಶ್ರೀಕಾಂತ ಅವರ ಜೊತೆ ಕಾರ್ಖಾನೆಗೆ ಹೋದಾಗ 2013ರಲ್ಲಿ ವಿಧಾನಸಭೆ ಚುನಾವಣಾ ಕೆಲಸಕ್ಕೆ ತಂದೆ ಶ್ರೀಕಾಂತ ಚಾಲಕರಾಗಿ ನಿಯೋಜನೆಗೊಂಡಿದ್ದರು. ಆಗ ಐಎಎಸ್‌ ಅಧಿಕಾರಿಗಳು ಆಡುತ್ತಿದ್ದ ಮಾತುಗಳು ಅವರಿಗೆ ನೀಡುವ ಗೌರವ ನನಗೆ ಸ್ಫೂರ್ತಿ ನೀಡಿದವು. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಪ್ರಯತ್ನ ಮಾಡಿದೆ ಆಗ ನನ್ನ ತಂದೆ ತಾಯಿ ದಿನನಿತ್ಯ ಕೂಲಿ ಮಾಡಿ ನನಗೆ ಓದಲು ಸಹಕಾರ ನೀಡಿದ್ದಾರೆ.

ನನ್ನ ಮಗ ಯುಪಿಎಸ್‌ಸಿ ಪಾಸಾಗಿ ಐಪಿಎಸ್ ಅಧಿಕಾರಿಯಾಗಿದ್ದು ನನಗೆ ತುಂಬಾ ಖುಷಿಯಾಗಿದೆ. ನಾನು ಒಬ್ಬ ಸಾಧಾರಣ ಚಾಲಕ ಈಗ ನನ್ನ ಮಗ ಯುಪಿಎಸ್‌ಸಿ ಪಾಸಾಗಿದ್ದು ಈಗ ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಂತೋಷದ ವಿಷಯ ನಮ್ಮ ಕೃಷ್ಣಾ ಸಕ್ಕರೆ ಕಾರ್ಖಾನೆಯವರ ಸಲಹೆ ಪಡೆದುಕೊಂಡು ನಾನು ನನ್ನ ಮಗನಿಗೆ ವಿದ್ಯಾಭ್ಯಾಸ ನೀಡಿದ್ದೇನೆ ಈಗ ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದು ನಮ್ಮಗೆ ಹೆಮ್ಮೆಯ ವಿಷಯ ಅನ್ನುತ್ತಾರೆ ಜಗದೀಶ ಅವರ ತಂದೆ ಶ್ರೀಕಾಂತ

ಜಗದೀಶನ ಪ್ರತಿಫಲಕ್ಕೆ ಇಂದು ನನ್ನ ಮಗನಿಗೆ ಪ್ರತಿಫಲ ಸಿಕ್ಕಿದೆ ಇಂದು ನಮ್ಮ ಅಡಹಳ್ಳಿ‌ ಮನೆತನದ ಗೌರವ ಹೆಚ್ಚಿಸಿದ್ದಾನೆ. ಅವನು ಕಷ್ಟದ ಪ್ರತಿಫಲವಾಗಿ ಆತನಿಗೆ ಪ್ರತಿಫಲ ಸಿಕ್ಕಿದೆ ಎನ್ನುತ್ತಾರೆ ತಾಯಿ ಸುಮಿತ್ರ

ಒಟ್ಟಾರೆಯಾಗಿ ಇಂದಿನ ಅಧುನಿಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನುವ ಛಲವಿದ್ದರೆ ಸತತ ಓದು ಮತ್ತು ಪರಿಶ್ರಮ ನಮ್ಮ ಕನಸುಗಳನ್ನು ನನಸು ಮಾಡುವುದರಲ್ಲಿ ಎರಡು ಮಾತಿಲ್ಲ ಎನ್ನುವುದಕ್ಕೆ ಜಗದೀಶ ಅಡಹಳ್ಳಿ ಮಾದರಿಯಾಗಿದ್ದಾರೆ. ಐಎಎಸ್ ಕನಸು ಕಾಣುತ್ತಿರುವ ಬಡ ಮಕ್ಕಳಿಗೆ ಇಂದು ಚಾಲಕನ ಮಗ ಮಾದರಿಯಾಗಿದ್ದು ದಿನವೂ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದ ಜಗದೀಶ ಈಗ ಇನ್ನಷ್ಟು ಬಡ ಮಕ್ಕಳು ಉತ್ತಮ ಹುದ್ದೆಗಳನ್ನು ಅಲಂಕರಿಸಿ ತಮ್ಮ ಉದಾತ್ತ ಕೊಡುಗೆಯನ್ನು ಸಮಾಜಕ್ಕೆ ನೀಡುವಂತಾಗಲಿ ಅನ್ನುವದು ನಮ್ಮ ಆಶಯ.

 

Tags:

error: Content is protected !!