ಗ್ರಾಮ ಪಂಚಾಯತಿ ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಧ್ಯಕ್ಷ ಹಾಗೂ ಬೆಂಬಲಿತ ಸದಸ್ಯರು ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ಸಂಭವಿಸಿದೆ.

ಸಂಗಪ್ಪ ಗೂಡಗಾರ್ ಎಂಬ ವ್ಯಕ್ತಿಯ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಬೆಂಬಲಿತ ಸದಸ್ಯರು ಹಲ್ಲೆ ಮಾಡಿದ್ದಾರೆ. ಹೂಲಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿರೂಪಾಕ್ಷ ತೋರಗಲ್ ಮತ್ತು ಅವನ ಬೆಂಬಲಿತ ಸದಸ್ಯರಿಂದ ಹಲ್ಲೆ ಮಾಡಲಾಗಿದೆ. 2020-21ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ದುರುಪಯೋಗ ಆಗಿರುವ ಆರೋಪ ಕೇಳಿ ಬಂದಿತ್ತು. ಅಧ್ಯಕ್ಷ ವಿರೂಪಾಕ್ಷ ತೋರಗಲ್, ಪಿಡಿಓ ಫಕೀರವ್ವ ಹನಸಿ ವಿರುದ್ದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜಿ.ಪಂ ಸಿಇಓ ಅವರಿಗೆ ಮನವಿ ಸಂಗಪ್ಪ ಗೂಡಗಾರ್ ದೂರು ಕೊಟ್ಟಿದ್ದ.

ಬಳಿಕ ಅಕ್ರಮದ ತನಿಖೆ ಮಾಡುವಂತೆ ತಾಲೂಕು ಪಂಚಾಯತಿಗೆ ಸಿಇಓ ಆದೇಶ ಮಾಡಿದ್ರು. ಆ ಹಿನ್ನೆಲೆಯಲ್ಲಿ ನಿನ್ನೆ ತಾಲೂಕು ಪಂಚಾಯತಿ ಎಡಿ ಸಂಗನೌಡ ಹಂದ್ರಾಳ ನೇತೃತ್ವದಲ್ಲಿ ತನಿಖೆಗೆ ಮುಂದಾಗಿದ್ರು. ನಿನ್ನೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ವಿರೂಪಾಕ್ಷನಿಂದ ಸಂಗಪ್ಪನ ಮೇಲೆ ಹಲ್ಲೆಯಾಗಿರುವ ವಿಡಿಯೋ ವೈರಲ್ ಆಗಿದೆ.