Khanapur

ನಂದಗಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಹನುಮಂತ ಪಾಟೀಲ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಅಂಗೀಕಾರ

Share

ಹೌದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ನಂದಗಡದ ಅಧ್ಯಕ್ಷ ಹನುಮಂತ.ಭೀಮರಾಯ.ಪಾಟೀಲ ಇವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಯ ನಂದಗಡದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ‌ಸಭಾಗೃಹದಲ್ಲಿ ಜರುಗಿತ್ತು.ಈ ಸಭೆಗೆ 12 ಜನ ಸದಸ್ಯರು ಉಪಸ್ಥಿತರಿದ್ದರು.ಕೈ ಎತ್ತುವ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದರು.ಇದರಲ್ಲಿ 10 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದರು.2ಸದಸ್ಯರು ಕೈ ಎತ್ತದೇ ಸುಮ್ಮನೆ ಕೋಳಿತುಕೊಂಡರು.10 ಜನ ಸದಸ್ಯರು ಮತವನ್ನು ಚಲಾಯಿಸಿರುವುದು ರಿಂದ ಅಧ್ಯಕ್ಷ ರ ಅವಿಶ್ವಾಸ ಗೊತ್ತುವಳಿ ಮಂಡನೆಯು ಸಾಬೀತಾಗಿರುತ್ತದೆ.ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಜಿ.ಬಿ.ಕಬ್ಬೇರಳ್ಳಿ ಸರ್ಕಾರದ ನಿಯಾಮಾನುಗಳಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಈ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಯನ್ನು ನಡೆಸಿದರು.ಸಹಕಾರ್ಯದರ್ಶಿ ಕೆ.ಎ.ಮುಗಳಿ,ಎಸ್.ಎಸ್.ಕಂಗ್ರಾಳಕರ ಸಹಕರಿಸಿದರು.

-ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯ ಬಸವರಾಜ ಮುಗಳಿಹಾಳ ಅವರು ಅಧ್ಯಕ್ಷರಾದ ಹನುಮಂತ ಪಾಟೀಲ ಅವರು ಯಾವುದೇ ಅಭಿವೃದ್ಧಿ ದೃಷ್ಟಿಯಿಂದ ಸದಸ್ಯರೊಂದಿಗೆ ಸಹಕರಿಸಲಿಲ್ಲ,ಇದರ ಬಗ್ಗೆ ಅನೇಕ ಬಾರಿ ಸದಸ್ಯರು ಅವರ ಗಮನಕ್ಕೆ ತಂದಿದೆವು ತದನಂತರ ಅವರಿಗೆ ರಾಜಿನಾಮೆ ನೀಡುವಂತೆಯೂ ಆಗ್ರಹಿಸಿದೆವೆ ಅಭಿವೃದ್ಧಿ ಕುಂಠಿತವಾಗುತ್ತಿರುವುದರಿಂದ ಎಲ್ಲ ಹತ್ತು ಜನ ಸದಸ್ಯರು ಸೇರಿ ನಿರ್ಧಾರ ತೆಗೆದುಕೊಳ್ಳಲಾಯಿತು.ಮಾಜಿ ಶಾಸಕ ಅರವಿಂದ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಿರ್ಧಾರ ಮಾಡಿ ಅವರಿಗೆ ಪಕ್ಷ ಭೇದ ಮಾಡದೇ ಅವರಿಗೆ ಅಧ್ಯಕ್ಷರನ್ನಾಗಿ ಮಾಡಿದೆವು ಆದರೆ ಅವರು ಇದನ್ನು ಸರಿಯಾಗಿ ನಿಭಾಯಿಸಿಕೊಂಡು ಹೊಗದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.ಈ ಸಮಿತಿಯ ಉಪಾಧ್ಯಕ್ಷ ದುರ್ಗಾಪ್ಪ ತಳವಾರ, ರಾಮಚಂದ್ರ ಪಾಟೀಲ್, ಪರಶುರಾಮ ಕದಮ್,ಸಂಜಯ್ ಪಾಟೀಲ್, ಲಕ್ಷ್ಮೀ ಕಂಗ್ರಾಳಕರ, ಭಾರತಿ ಮೂಲಿಮನಿ, ಮಾರುತಿ ಗುರವ, ಸುಭಾಷ್ ಗಾವಡಾ,ಖೇಮಾಜಿ ಮಾದಾರ, ಬಸವರಾಜ ಮುಗಳಿಹಾಳ,ಶಬ್ಬಿರ ಮುಜಾವರ ಉಪಸ್ಥಿತರಿದ್ದರು.

Tags:

error: Content is protected !!