ಬೆಳಗಾವಿಯ ಗ್ರಾಹಕರ ನ್ಯಾಯಾಲಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ಭೇಟಿ ನೀಡಿದರು.

: ಶನಿವಾರ ಬೆಳಗಾವಿಯ ಗ್ರಾಹಕರ ನ್ಯಾಯಾಲಯಕ್ಕೆ ಭೇಟಿ ನೀಡಿದ ಸಚಿವ ಉಮೇಶ ಕತ್ತಿ ನೂತನ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶರು, ಅಧಿಕಾರಿಗಳು ನ್ಯಾಯವಾದಿಗಳ ಜೊತೆಗೆ ಚರ್ಚಿಸಿದರು.
ಈ ವೇಳೆ ಉತ್ತರ ಶಾಸಕ ಅನಿಲ್ ಬೆನಕೆ, ನ್ಯಾಯವಾದಿಗಳಾದ ಆರ್.ಸಿ.ಪಾಟೀಲ್, ಡಿ.ಎಮ್.ಪಾಟೀಲ್, ಸುಲ್ತಾನ್ಪುರಿ, ಹಣಮಂತ ಕೊಂಗಾಳಿ, ಎನ್.ಆರ್.ಲಾತೂರ ಸೇರಿ ಇನ್ನಿತರರು ಉಪಸ್ಥಿತರಿದ್ದರು.