Politics

ಸಿಡಿ ವಿಚಾರ ನ್ಯಾಯಾಂಗ ತನಿಖೆ ಆಗಲಿ;ಸಿಡಿ ನಾವು ಬಿಡುಗಡೆ ಮಾಡಲ್ಲಾ; ಯತ್ನಾಳ ಪರ ಬ್ಯಾಟಿಂಗ್ ನಡೆಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ

Share

ರಾಜ್ಯ ಸಚಿವ ಸಂಪುಟದಲ್ಲಿ ಸಿಡಿ ತೋರಿಸಿ ಸಿಎಂ ಯಡಿಯೂಪ್ಪನವರಿಗೆ ಹೆದರಿಸಿ ಸಚಿವ ಸ್ಥಾನ ಪಡೆದಿದ್ದಾರೆ ಎಂದು ಅವರ ಪಕ್ಷದವರೇ ಹೇಳಿದ್ದಾರೆ, ಈ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾಗಿ ಹೇಳಿದ್ದಾರೆ ಈ ಕುರಿತು ನ್ಯಾಯಾಂಗ ತನಿಖೆ ಮಾಡಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ಒತ್ತಾಯಿಸಿದ್ದಾರೆ.

ವಿಜಯಪುರ ದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡುತ್ತಾ ಸಿಎಂ ಯಡಿಯೂರಪ್ಪ ಅವರಿಗೆ ಸಿಡಿ ತೋರಿಸಿ ಬ್ಲಾಕ್ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ ಎಂಬ ಆರೋಪ ವಿಚಾರಕ್ಕೆ ಮೇಲಿನಂತೆ ಪ್ರತಿಕ್ರಿಯಿಸುತ್ತಾ ಸಿಡಿ ತೋರಿಸಿ ಬ್ಲಾಕ್ಮೇಲ್ ಮಾಡುವುದು ಹಣ ಕೊಡುವುದು ಈ ಮೂಲಕ ಮಂತ್ರಿ ಆಗುವುದನ್ನು ನಾನು ನನ್ನ ಜೀವಮಾನದಲ್ಲಿ ನೋಡಿಲ್ಲ, ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಎಸ್ ಆರ್ ಪಾಟೀಲ್ ಒತ್ತಾಯಿಸಿದರು.

ಇನ್ನೂ ಸಚಿವಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೆ ಅನ್ಯಾಯವಾಗಿದೆ, ಬಾಗಲಕೋಟೆಗೆ 2 ಸ್ಥಾನ ಮತ್ತು ಬೆಳಗಾವಿಗೆ 5 ಸ್ಥಾನಗಳನ್ನು ನೀಡಲಾಗಿದೆ, ಆದರೆ ಹಿಂದುಳಿದ ವಿಜಯಪುರ ಜಿಲ್ಲೆಗೆ ಒಂದೇ ಒಂದು ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಇಂಥ ಘಟನೆಯಿಂದ ದೇಶದಲ್ಲಿಯೇ ಕರ್ನಾಟಕ ರಾಜ್ಯದ ಮಾನ ಮರ್ಯಾದೆ ಹರಾಜು ಆಗಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನೂ ನಿಜಲಿಂಗಪ್ಪನವರ ಬಳಿಕ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಯಡಿಯೂರಪ್ಪರಿಗೆ ಇದೆ, ವೈಯಕ್ತಿಕವಾಗಿ ಅವರ ಬಗ್ಗೆ ಗೌರವವಿದೆ. ಆದರೆ ಇಂಥ ಆರೋಪ ಬಂದ ವೇಳೆ ಅವರು ರಾಜೀನಾಮೆ ನೀಡಬೇಕಿತ್ತು ಎಂದು ಎಸ್ ಆರ್ ಪಾಟೀಲ್ ಹೇಳಿದ್ದಾರೆ. ಇನ್ನು ಸಿಎಂ ಜೊತೆ ವಿರೋಧ ಪಕ್ಷದ ನಾಯಕರು ಮುಖಂಡರು ಶಾಮೀಲಾಗಿದ್ದಾರೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ದೇಶದಿಂದ ಬ್ರಿಟಿಷರನ್ನು ಹೊಡೆದೋಡಿಸಿದವರು ನಾವು ನಾವೇಕೆ ಅಂಥವರ ಜೊತೆ ಶಾಮಿಲ್ ಆಗಬೇಕು ಎಂದು ಎಸ್ ಆರ್ ಪಾಟೀಲ್ ಉತ್ತರಿಸಿದರು. ದೇಶಕ್ಕಾಗಿ ನಮ್ಮ ಮಹಾನ್ ನಾಯಕರು ಪ್ರಾಣ ತೆತ್ತಿದ್ದಾರೆ. ನಾವೇಕೆ ಇಂಥವರ ಜೊತೆ ಶಾಮಿಲ್ ಆಗಬೇಕು ಎಂದು ಪ್ರಶ್ನಿಸಿದರು. ಸರ್ಕಾರ ಕೇವಲ ಬಿಜೆಪಿ ಶಾಸಕರಿದ್ದ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ, ಕಾಂಗ್ರೆಸ್ ಶಾಸಕರಿದ್ದ ಕ್ಷೇತ್ರಗಳಿಗೆ ಹಣವನ್ನು ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿದರು.

ಕಾಂಗ್ರೆಸ್ ನಿಂದ ಓಡಿಹೋಗಿ ಮಂತ್ರಿಯಾದವರು ಕ್ಷೇತ್ರಗಳಿಗೆ ಹೆಚ್ಚಿನ ಹಣ ನೀಡಿದ್ದಾರೆ ತಾರತಮ್ಯ‌ ನೀತಿ ಮಾಡಲಾಗುತ್ತಿದೆ ಎಂದು ಅಧಿವೇಶನದಲ್ಲಿಯೇ ನಾವು ದೂರು ನೀಡಿದ್ದೇವೆ ಎಂದರು. ಇನ್ನೂ ಸಿಎಂಗೆ ಸಂಬಂಧಪಟ್ಟ ಸಿಡಿ ಬಿಡುಗಡೆ ವಿಚಾರವಾಗಿ ಸಿಡಿ ಬಿಡುಗಡೆ ಮಾಡುವಂತಹ ಕೆಟ್ಟ ಕೆಲಸವನ್ನು ನಾವು ಮಾಡಲ್ಲ, ನಮ್ಮವರ ಬಳಿ ಯಾವುದೇ ಸಿಡಿ ಇಲ್ಲ ಎಂದು ಎಸ್ ಆರ್ ಪಾಟೀಲ್ ಹೇಳಿದರು. ಇದೇ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟ್ ಬೀಸಿದ ಎಸ್ ಆರ್ ಪಾಟೀಲ ಶಾಸಕ ಯತ್ನಾಳರ ಧೈರ್ಯವನ್ನು ಮೆಚ್ಚುತ್ತೇನೆ, ಉತ್ತರ ಕರ್ನಾಟಕಕ್ಕೆ ಅನ್ಯಾಯ ವಾದಾಗ ಯತ್ನಾಳ್ ಧ್ವನಿಯೆತ್ತಿದ್ದಾರೆ. ಪಕ್ಷಕ್ಕಿಂತ ಮೊದಲು ನಮ್ಮ ಭಾಗದ ಅಭಿವೃದ್ಧಿ ಮುಖ್ಯ ಎಂದು ಎಸ್ ಆರ್ ಪಾಟೀಲ ಹೇಳಿದರು..

Tags:

error: Content is protected !!