Vijaypura

ಯತ್ನಾಳ, ನಡಹಳ್ಳಿ ನನಗಿಂತ ಹಿರಿಯ ಶಾಸಕರಿದ್ದಾರೆ. ಅವರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಲಿ; ಶಾಸಕ ಸೋಮನಗೌಡ ಪಾಟೀಲ

Share

ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದು ವಿಜಯಪುರದಲ್ಲಿ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಆಗ್ರಹಿಸಿದ್ದಾರೆ.

ವಿಜಯಪುರದ ಲ್ಲಿ ಮಾದ್ಯಮ ಗಳೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಯತ್ನಾಳ, ನಡಹಳ್ಳಿ ನನಗಿಂತ ಹಿರಿಯ ಶಾಸಕರಿದ್ದಾರೆ. ಅವರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಲಿ, ನನಗೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ತಂದೆ ಈ ಹಿಂದೆ ಸಚಿವರಾಗಿದ್ದರು, ಅವರ ಜೊತೆ ಕೆಲಸ ಮಾಡಿದ್ದೇನೆ, ಸಚಿವ ಸ್ಥಾನ ನೀಡಿದರೆ ನಿಭಾಯಿಸುವೆ ಎಂದರು.

ಅಲ್ಲದೇ ದೇವರ ಹಿಪ್ಪರಗಿ ಮತಕ್ಷೇತ್ರದ ಪೀರಾಪುರ- ಬೂದಿಹಾಳ ಏತ ನೀರಾವರಿ ಯೊಜನೆಗೆ ಹಣ ನೀಡಲಿ, ಈ ಕುರಿತು ಸಿಎಂ ಗೆ ಆಗ್ರಹಿಸಿದ್ದೇನೆ ಸಿಎಂ‌ ನಮ್ಮ‌ ಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದಾರೆ, ನಾನು ಈವರೆಗೆ ವಿ. ವಿಜಯೇಂದ್ರರನ್ನು ಈವರೆಗೆ ಭೇಟಿಯೇ ಮಾಡಿಲ್ಲ, ನನಗೆ ವಿಜಯೇಂದ್ರ ಹಸ್ತಕ್ಷೇಪದ ಅನುಭವ ಆಗಿಲ್ಲ ಎಂದು ಸೋಮನಗೌಡ ಪಾಟೀಲ ಹೇಳಿದ್ರು…

Tags:

error: Content is protected !!