ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಮಾರಾಮಾರಿ ನಡೆದಿದೆ. ಬಾವಿಯ ನೀರು ಬಳಸುವ ಸಲುವಾಗಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಲಗುರ್ಕಿ ಗ್ರಾಮದಲ್ಲಿ ನಿನ್ನೆ ಸಂಜೆ ಮಹಾದೇವಪ್ಪ ಪಾರಗೊಂಡ ಮೇಲೆ ನಾಲ್ವರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಾವಿಯ ನೀರು ಬಳಸದಂತೆ ಮಾಹದೇವಪ್ಪ ಹೇಳಿದಕ್ಕೆ ಗಂಗಾಧರ ಪಾರಗೊಂಡ, ಮಾಮಲ್ಲಪ್ಪ ಪಾರಗೊಂಡ, ಸಚಿನ ನಾಗರಾಳ, ವೀರೇಶ ಪಾರಗೊಂಡ ಹಲ್ಲೆಗೈದಿರುವ ನಾಲ್ವರ ವಿರುದ್ಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
